Thursday, September 10, 2020

ಹಳೆ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ.


ನರಸಿಂಹರಾಜಪುರ : ತಾಲೂಕಿನ ಮೆಣಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

2020-21 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಗುರುವಾರ ಕಾಲೇಜಿನ ಆವರಣದಲ್ಲಿ ಜರುಗಿದ್ದು ನಿಕಟಪೂರ್ವ ಅಧ್ಯಕರಾಗಿ ಪ್ರಶಾಂತ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಂತೋಷ್ ಕುಮಾರ್, ಉಪಾಧ್ಯಕ್ಷರಾಗಿ ಗುರುಶಾಂತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಉದಯ್ ಕುಮಾರ್. ಸಂಘಟನಾ ಕಾರ್ಯದರ್ಶಿಗಳಾಗಿ ಶೃಜಿತ್, ಹನೀಫ್, ಪುರುಷೋತ್ತಮ್, ಮುರುಳಿ, ಪ್ರಣಮ್ಯ ಜೈನ್, ಹಾಗೂ ಖಜಾಂಚಿಯಾಗಿ ಜಿವೇಂದ್ರ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

ನಿರ್ದೇಶಕರುಗಳಾಗಿ ಪ್ರವೀಣ್ ಕುಮಾರ್, ಸಲೀಂ, ರತ್ನಾಕರ, ಅಶೋಕ್, ನಿತಿನ್, ಡೈಸನ್, ಡೇವಿಡ್, ಪ್ರಶಾಂತ್ ಮತ್ತು ನಿಶ್ಚಿತಾ ಅವರು ಆಯ್ಕೆಯಾಗಿದ್ದಾರೆ. ಹಾಗೆ ಕಾನೂನು ಸಲಹೆಗಾರರಾಗಿ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

0 Comments:

Post a Comment

Subscribe to Post Comments [Atom]

<< Home