ಅಕ್ರಮ ಮದ್ಯ ಮಾರಟ ಓರ್ವನ ಬಂಧನ
ಅಕ್ರಮವಾಗಿ ಮದ್ಯಮಾರಟ ನಡೆಯುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದ ಕಳಸ ಠಾಣೆ ಪೊಲೀಸರು ಒಬ್ಬನನ್ನು ಬಂಧಿಸಿ ಸುಮಾರು 2000ಕ್ಕೂ ಅಧಿಕ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಇಡಕಣಿ ಗ್ರಾಮದ ಸಿಡ್ಲಾರ್ ಮಕ್ಕಿಯ ಜಯರಾಜ್ ( 36) ಬಂಧಿತ ವೈಕ್ತಿ . ಈತನು ತನ್ನ ಮನೆಯಲ್ಲಿ ಅಕ್ರಮವಾಗಿ
ಬೆಂಗಳೂರು ವಿಸ್ಕಿ ಪ್ಯಾಕೆಟ್ ಗಳನ್ನು ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಮಾರಟ ಮಾಡುತಿದ್ದ ಬಗ್ಗೆ ಪೊಲೀಸರು ಖಚಿತ ಮಾಹಿತಿ ಸಂಗ್ರಹಿಸಿದ್ದರು. ಭಾನುವಾರ ಸಂಜೆ ಕಳಸ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 2000ಕ್ಕೂ ಅಧಿಕ ಮೌಲ್ಯದ ಬೆಂಗಳೂರು ವಿಸ್ಕಿ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಕಳಸ ಠಾಣೆಯ ಸಿಬ್ಬಂದಿಗಳಾದ ಪಿಎಸ್ಐ ಮಂಜಣ್ಣ, ಎಎಸೈ ಮುರಳೀಧರ, ಎಎಸೈ ಗೋವಿಂದ್ ನಾಯ್ಕ್, ಪೊಲೀಸ್ ಕಾನ್ಸ್ಟೇಬಲ್ ಪ್ರದೀಪ್ ಮತ್ತು ತಿಪ್ಪೇಶ್ ಪಾಲ್ಗೊಂಡಿದ್ದರು.
ಕೊರೋನಾದಿಂದಾಗಿ ಜೈಲುವಾಸ ತಪ್ಪಿಸಿಕೊಂಡ ಆರೋಪಿ.
ಈ ನಡುವೆ ಕೊರೋನಾ ಭೀತಿ ಹಿನ್ನಲೆಯಲ್ಲಿ ಆರೋಪಿಯ ಮೇಲೆ ಎಫ್ಐಆರ್ ದಾಖಲಾಗಿದ್ದರೂ ಕೂಡ ಆರೋಪಿಯನ್ನು ಕೋರ್ಟ್ ಗೆ ಹಾಜರು ಪಡಿಸಿದಂತೆ ನ್ಯಾಯಾಧೀಶರು ಠಾಣಾಧಿಕಾರಿಗೆ ತಿಳಿಸಿದ್ದು, ಆರೋಪಿಗೆ ಯಾರಾದರೂ ಜಾಮೀನು ನೀಡಿದರೆ ಅವರನ್ನು ಬಿಡುಗಡೆಗೊಳಿಸುವಂತೆ ಮೂಡಿಗೆರೆ ತಾಲ್ಲೂಕು ನ್ಯಾಯಾಧೀಶರು ಠಾಣಾಧಿಕಾರಿಗೆ ತಿಳಿಸಿದ್ದಾರೆ.



0 Comments:
Post a Comment
Subscribe to Post Comments [Atom]
<< Home