Thursday, March 5, 2020

ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ

ಚಿಕ್ಕಮಗಳೂರಿನ ಸಮೀಪ ಆನೆದಂತ ಮಾರಾಟದ ಪ್ರಮುಖ ಆರೋಪಿ ಕಾಂಗ್ರೆಸ್‍ನ ಐ.ಟಿ.ಸೆಲ್‍ನ ಪ್ರಮುಖ ಶಬರೀಶ್ ಅವರನ್ನು ಪೋಲಿಸರು ಬಂಧಿಸಿದ ಹಿನ್ನೆಲೆಯಲ್ಲಿ ಶನಿವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಅವರ ನಿವಾಸಕ್ಕೆ ದಾಳಿ ಮಾಡಿ ಶಬರೀಶ್ ಅವರ ತಂದೆ ರಮೇಶ್ ಹಾಗೂ ಮತ್ತೊಬ್ಬ ಆರೋಪಿ ಯೋಗೀಶ್ ಅವರ ಸಹೋದರ ರಾಜು ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು.ಅವರು ನೀಡಿದ ಮಾಹಿತಿಯಂತೆ ಆರೋಪಿಗಳನ್ನು ಮತ್ತೆ ಶಬರೀಶ್ ಮನೆಗೆ ಕರೆದೊಯ್ಯಲಾಯಿತು.ಅವರ ಮನೆಯಿಂದ 300ಮೀ ದೂರದ ಸರಕಾರಿ ಜಾಗದಲ್ಲಿ ಆಮೆ ಪತ್ತೆಯಾಗಿತ್ತು.
ಸಾರ್ವಜನಿಕರು ನೀಡಿದ ಮಾಹಿತಿಯಂತೆ ಮತ್ತೆ ಆತನ ಮನೆಗೆ ತೆರಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಅವರು ನಕ್ಷತ್ರ ಆಮೆ,ಏರ್‍ಗನ್,ಏರ್ ಪಿಸ್ತೂಲ್,ಗುಂಡುಗಳು,ಜಿಲೆಟಿನ್ ಕಡ್ಡಿ,ತೋಟದ ಗಂಧಕ ಹಾಗೂ ಬತ್ತಿ,ಎರಡು ಕೆ.ಜಿ ಗಂಧ ಮತ್ತು ಸಂಬಂಧಪಟ್ಟ ಇನ್ನಿತರ ಪರಿಕರಗಳು ಪತ್ತೆಯಾಗಿದೆ.ಪ್ರಥಮ ಆರೋಪಿ ಶಬರೀಶ ಎಂದು ಇಲಾಖೆಯವರು ಪ್ರಕರಣದಲ್ಲಿ ದಾಖಲಿಸಿಕೊಂಡಿದ್ದಾರೆ.ಏರ್‍ಗನ್ ಮತ್ತು ಏರ್ ಪಿಸ್ತೂಲು,ಮದ್ದುಗುಂಡು ಪರಿಕರಗಳನ್ನು ಪೋಲಿಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆರೋಪಿಗಳ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಹಾಜಾರು ಪಡಿಸಿದರು.
ಸುದ್ಧಿಗಾರರ ಜೊತೆ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಂಬ್ಲೂರು ರಾಮಕೃಷ್ಣ ಮಾತನಾಡಿ "ಈ ಪ್ರಕರಣವನ್ನು ಕಂಡಾಗ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.ಅಕ್ರಮವಾಗಿ ಮನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನು ಶಸ್ತ್ರಾಸ್ತ್ರವನ್ನು ಸಂಗ್ರಹಿಸಿ ಇಟ್ಟ ಬಗ್ಗೆ ಶಾಸಕ ಟಿ.ಡಿ.ರಾಜೇಗೌಡರು ಸಾರ್ವಜನಿಕರಿಗೆ ಉತ್ತರ ನೀಡಬೇಕು.ಈ ಕೃತ್ಯವನ್ನು ಅರಣ್ಯ ಹಾಗೂ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದರು.

ಈ ಕಾರ್ಯಚರಣೆಯಲ್ಲಿ ಎಸಿಎಫ್ ಸತೀಶ್,ವಲಯಾರಣ್ಯಾಧಿಕಾರಿ ಸಂಪತ್ ಪಟೇಲ್, ನಗರವ್ಯಾಪ್ತಿಯ ಅರಣ್ಯ ವನಪಾಲಕರಾದ ರಘು,ಗಿರೀಶ್, ಅರಣ್ಯ ರಕ್ಷಕರಾದ ಆಶೋಕ್,ದೀಪಾ ಮತ್ತುಸಿಬ್ಬಂದಿಗಳಾದ ಪ್ರಕಾಶ್ ಮುಂತಾದವರು ತನಿಖೆಯಲ್ಲಿ ಭಾಗಿಯಾಗಿದ್ದರು.ಅರಣ್ಯ ಇಲಾಖೆ ಮಾಡಿದ ಕ್ಷಿಪ್ರ ತನಿಖೆಯ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

0 Comments:

Post a Comment

Subscribe to Post Comments [Atom]

<< Home