Wednesday, December 25, 2019

ಬಾಳೆಹೊನ್ನೂರು- ಶೃಂಗೇರಿ ರಸ್ತೆಯಲ್ಲಿ ಬಿರುಕು! ವಾಹನ ಸವಾರರಲ್ಲಿ ಆತಂಕ

ಬಾಳೆಹೊನ್ನೂರು- ಶೃಂಗೇರಿ ರಸ್ತೆಯ ಇಟ್ಟಿಗೆ ಸೀಗೋಡು ಎಂಬಲ್ಲಿ ಇಡೀ ರಸ್ತೆಯು ಒಂದು ಬದಿಯಿಂದ ಮತ್ತೊಂದು ಬದಿಯವರೆಗೂ ಸಂಪೂರ್ಣ ಬಿರುಕುಬಿಟ್ಟಿದ್ದು ವಾಹನ ಸವಾರರಲ್ಲಿ ಆತಂಕ ಮೂಡಿದ್ದು ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ರಸ್ತೆಯನ್ನು ಸರಿಪಡಿಸಬೇಕೆಂದು ವಾಹನ ಸವಾರರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ. ಚಿಕ್ಕಮಗಳೂರು, ಬಾಳೆಹೊನ್ನೂರು, ಜಯಪುರ, ಶೃಂಗೇರಿ ಮತ್ತು ಕೊಪ್ಪ ಸಂಪರ್ಕಕ್ಕೆ ಇಟ್ಟಿಗೆ ಸಿಗೋಡು ರಸ್ತೆ ಮುಖಾಂತರವೇ ಹೋಗ್ಬೇಕಾಗಿರುವುದರಿಂದ ಈ ರಸ್ತೆ ಸಂಪೂರ್ಣ ಬಿರುಕು ಬಿಟ್ಟಿರೆ ಎನ್.ಆರ್.ಪುರ ಮೂಲಕ ಈ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ.ಆದ್ದರಿಂದ ಅಧಿಕಾರಿಗಳು ಶೀಘ್ರವಾಗಿ ಈ ರಸ್ತೆಯನ್ನು ಪರಿಶೀಲಿಸಿ ಇದನ್ನು ದುರಸ್ಥಿಗೊಳಿಸಬೇಕಾಗಿ ಮಲ್ನಾಡ್ ವಾಣಿ ಈ ಮೂಲಕ ಕೇಳಿಕೊಳ್ಳುತ್ತದೆ.


0 Comments:

Post a Comment

Subscribe to Post Comments [Atom]

<< Home